ಜೈಭಾರತಾಂಭ ಮೂವೀ ಮೇಕರ್ಸ್ ಲಾಂಛನದಲ್ಲಿ ಪರಮೇಶ್ ಕೆ.ಆರ್.ಪೇಟೆ ಅವರು ನಿರ್ಮಿಸುತ್ತಿರುವ, ‘೧೯೪೪ ಚಿತ್ರದ ‘ಪ್ರತಿ ಎದೆಯಲ್ಲಿ ದನಿ ಮೊಳಗಲಿ ನಮ್ಮ ಭಾರತ ನಮ್ಮದಾಗಲಿ ಎಂಬ ಹಾಡಿನ ಚಿತ್ರೀಕರಣ ತಾವರೆಕೆರೆ ಸುತ್ತಮುತ್ತ ನಡೆದಿದೆ. ನವೀನ್ಕೃಷ್ಣ, ಧೀರಜ್ ಸೂರ್ಯ, ಶಿವಾನಿ, ಕಾಜುವಾಲಿ ಹಾಗೂ ಸಹ ಕಲಾವಿದರು ಅಭಿನಯಿಸಿದ ಈ ಹಾಡಿಗೆ ಸುರೇಶ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಎನ್.ಎಸ್.ರಾವ್ ಅವರ ‘ರೊಟ್ಟಿಋಣ ನಾಟಕವನ್ನಾಧರಿಸಿದೆ.
ಬದ್ರಿನಾಥ್ ಈ ಚಿತ್ರಕ್ಕೆ ಛಾಯಾಗ್ರಹಣದೊಂದಿಗೆ ನಿರ್ದೇಶನವನ್ನು ಮಾಡಿದ್ದಾರೆ. ರಾಜೇಶ್ರಾಮನಾಥ್ ಸಂಗೀತ ನಿರ್ದೇಶನ, ಜ಼್ಞಾನೇಶ್ ಸಂಕಲನ, ಸುರೇಶ್ ನೃತ್ಯ ನಿರ್ದೇಶನ ಹಾಗೂ ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ನವೀನ್ಕೃಷ್ಣ, ಶೃತಿ, ಭವ್ಯ, ಶಿವಾನಿ ಸುಚೇಂದ್ರಪ್ರಸಾದ್, ಧೀರಜ್ಸೂರ್ಯ, ಕಾಜುವಾಲಿ, ವೀರೇಶ್ ಬೆಳಕವಾಡಿ ಮುಂತಾದವರಿದ್ದಾರೆ.